ಕಥೆ, ಕವನ ವಿಭಾಗ

ಹಾಡು : ನಿನ್ನನೇ ನಂಬಿದೆನು
ಹಾಡಿರುವವರು : ಎಸ್ ವಿಠ್ಠಲ ರಾವ್
ಅವರೇ ನುಡಿಸಿರುವ ಕೀ ಬೋರ್ಡ್
ಶ್ರೀ ಜಯರಾಂ ಕೆ ವಿ ಅವರು ಬರೆದ ಒಂದು ಘಟನೆ
( ಅವರ ಮೊಮ್ಮಗ ನೋಡನೆ ಅವರ ಮಾತು )
ತಾತ ಕೇಳಿದ್ರು 3 ವರ್ಷದ ಮೊಮ್ಮಗನನ್ನು :
“ ನೀನು ಅಮ್ಮನಿಗೆ ಮಾತ್ರ ಮುತ್ತು ಕೊಡುತೀಯಲ್ಲ. ಅಪ್ಪನಿಗೆ ಮತ್ತು ತಾತನಿಗೆ ಯಾಕೆ ಮುತ್ತು ಕೊಡೋಕ್ಕೆ ಇಷ್ಟ ಪಡುವುದಿಲ್ಲ?”. ಅವನ ಉತ್ತರ ಈ ರೀತಿ ಇತ್ತು. “ ನಿಮ್ಮಿಗರಿಗೂ ದಾಡಿ ಇದೆ,ಚುಚ್ಚುತ್ತೆ.
ತಾತ ಕೇಳಿದ್ರು ”. ಹಾಗಾದ್ರೆ ನೀನು ಮೋದಿ ಅವರಿಗೆ ಮುತ್ತು ಕೊಡ್ತಿಯಾ? “
ಮೊಮ್ಮಗನ ಉತ್ತರ ” ಇಲ್ಲಪ್ಪಾ ಅವರಿಗೂ ದಾಡಿ ಇದೆ “. ತಾತ ಕೇಳಿದ್ರು ”“ಹಾಗಾದ್ರೆ? “
ಮೊಮ್ಮಗನ ಉತ್ತರ ಎಲ್ಲರನ್ನು ಚಕಿತಗೊಳಿಸಿತು.
“ಮೋದಿಅವರ ಫೋಟೋ ಕೊಡಿ, ಅದಕ್ಕೆ ಮುತ್ಹು ಕೊಡ್ತೀನಿ ”

ಹಾಡು : ಭಯವೇಕೆ ಮನುಜರಿಗೆ .. ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ
ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ
ಈ ಕೆಳಗಿನ ಲಿಂಕ್ ಒತ್ತಿ ಹಾಡು ಕೇಳಿ :

ಕವನ – ಭಾವನಾತ್ಮಕ ಸಂಬಂಧ-ರಚನೆ: ಶ್ರೀಮತಿ ಸುಧಾ ಶ್ರೀನಾಥ್
ಮನದ ಮಾತನಾಲಿಸುವ,
ಮೌನದ ನೋವನರಿಯುವ…
ಅಪರೂಪದ ಆ ಬಂಧ,
ಅವಿನಾಭಾವ ಸಂಬಂಧ…
ರಕ್ತದ ನಂಟಿಗಿಂತ ಮಿಗಿಲಾದ,
ನಂಬಿಕೆಯ ಸುಂದರ ಮೂರ್ತಿ…
ಹೃದಯದಗರ್ಭಗುಡಿಯಲಿನೆಲೆಸಿರುವ,
ಗಟ್ಟಿ ಬಂಗಾರದ ಆಕೃತಿ…
ಅನುಮಾನಕೆ ಆಸ್ಪದವನು
ಎಂದೆಂದಿಗೂ ಕೊಡದ…
ಅಪರಿಮಿತ ಅನುರಾಗದ
ನಿರಂತರ ಹರಿವ ಕಾಲುವೆ…
ವಿಶ್ವಾಸ ಮಾತ್ರ ಮೆಟ್ಟಿಲಾಗಿ,
ನಿರ್ಮಿತವಾದ ಸುಂದರ ಸೇತುವೆ…
ನೀ ಎಷ್ಟೇ ದೂರವಿದ್ದರೂ ಹತ್ತಿರವೆನಿಸುವ
ಹೃದಯದ ನಿಶ್ಶಬ್ದ ದೈವವೆ

ಹಾಸ್ಯ : ನನ್ನ ಮದುವೆಗೆ ಹೆಣ್ಣು ನೋಡಲು ಹೋದಾಗ …ರಚನೆ : ಶ್ರೀ ಜಯರಾಂ ಎ ಎಸ್
ಪ್ರಿಯ ಓದುಗರೇ , ಇದು 90% ನಡೆದ ಘಟನೆಗೆ 10% ಉಪ್ಪು , ಖಾರ ಹಾಕಿ ಹೇಳಿದ್ದೇನೆ ! ಕೇಳಿ ಆನಂದಿಸಿ . ದಯವಿಟ್ಟು ಗಮನಿಸಿ : watch on YouTube ಎಂಬುದನ್ನು ಒತ್ತಿದರೆ , ಮೊಬೈಲ್ ನಲ್ಲಿ ದೊಡ್ಡದಾಗಿ ಕಾಣುತ್ತದೆ . ಮತ್ತೋದು ಅಂಶ : ಈ ವಿಡಿಯೋ ಮಾಡಿ 4 ವರ್ಷ ಆಗಿದೆ .
ಭಹಳ ಚನ್ನಾಗಿದೆ. ಓದಿ ಬಹಳ ಸಂತೋಷ ವಾಯಿತು