ಸ್ಪರ್ಧಾ ವಿಭಾಗ
ಈ ಸಂಚಿಕೆಯ ಸ್ಪರ್ಧೆ

ಈ ಸಂಚಿಕೆಯ ಸ್ಪರ್ಧೆ
ಪ್ರಿಯ ಓದುಗರೇ
ಈ ಸಲದ ಸ್ಪರ್ಧೆ ಬಹು ವಿಶೇಷವಾಗಿದೆ.

ಇದು ರಾಮಾಯಣ ಮಹಾಭಾರತದ ಕಾಲದಲ್ಲಿ ಮೊಬೈಲ್ ಇದ್ದಿದ್ದರೆ ಎಂಬುದನ್ನು ನೀವು ಊಹಿಸಿಕೊಂಡು, ಅದು ಹೇಗಿರುತಿತ್ತು ಎಂದು ಸಂಕ್ಷಿಪ್ತವಾಗಿ 20 ಸಾಲು ಒಳಗಡೆ ಬರೆದು ಕಳಿಸಬೇಕು. ಬರೆದು ಕಳಿಸುವುದಕ್ಕಿಂತ ಧ್ವನಿಯಾಗಿ ನಿಮ್ಮ ಮಾತುಗಳನ್ನು ಕಳಿಸಿದರೆ ಇನ್ನೂ ಉತ್ತಮ ಆಗ ನೀವು ಇನ್ನೂ ಹೆಚ್ಚು ವಿಷಯವನ್ನು ಸಂಕ್ಷಿಪ್ತವಾಗಿ ಕಳಿಸಬಹುದು .ಇದರಿಂದ ನಾನು ಅದನ್ನು ಟೈಪ್ ಮಾಡುವುದು ತಪ್ಪುತ್ತದೆ. ಅತ್ಯಾಕರ್ಷಕ ಬರಹಕ್ಕೆ ಬಹುಮಾನವಿದೆ .ದಯವಿಟ್ಟು ಎಲ್ಲರೂ ಪ್ರಯತ್ನಿಸಿ.
ಹಾಗೆಯೇ ಒಂದು ವಿಷಯ: ಇದು ಕೇವಲ ಹಾಸ್ಯಕ್ಕಾಗಿ ಹಾಗೂ ನಿಮ್ಮ ಊಹೆಗಳಿಗಾಗಿ ಮಾತ್ರ ಮಾಡಿರುವುದೇ ವಿನಹ ಯಾವುದೇ ದುರುದ್ದೇಶ ಇಲ್ಲವೆಂದು ಖಚಿತಪಡಿಸುತ್ತೇನೆ. ಯಾರು ಕೂಡ ಅನ್ಯತಾ ಭಾವಿಸಬಾರದು ಎಂದು ಕೇಳಿಕೊಳ್ಳುತ್ತೇನೆ
ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು



ಚಿತ್ರದ ಶೀರ್ಷಿಕೆಗಳು
ಶ್ರೀಮತಿ ಸಾಮ್ಯ ನಾಗರಾಜ್
1. ಗೋವಿಂದಾ ಗೋವಿಂದ
2. ಮಾತು ಬೆಳ್ಳಿ ಮೌನ ಬಂಗಾರ
3. ಸೂಪರ್
4. ಭೇಷ್, ಒಪ್ಪಿದೆ
5. ಟಾಟಾ ಬೈ ಬೈ
6. ನೀರು ಬೇಕು, ಬಾಯಾರಿಕೆ
7. ನಿನಗೊಂದು ದೊಡ್ಡ ನಮಸ್ಕಾರ
8. ಅಯ್ಯೋ ಇಷ್ಟೇನಾ, ಇಷ್ಟಕ್ಕೆ ಇಷ್ಟೊಂದ್ ಯೋಚನೆ ಮಾಡಿದ್ನಲ್ಲಪ್ಪ!
9. ಅಭಯ ಹಸ್ತ
10. ಏನೇನೂ ಚೆನ್ನಾಗಿಲ್ಲ. ನೀರಸ

ಶ್ರೀಮತಿ ಸೌಮ್ಯ ನಾಗರಾಜ್ ಅವರು ಒಬ್ಬರೇ ಬರೆದಿದ್ದಾರೆ . ಅವರಿಗೆ ಬಹುಮಾನ ಲಭಿಸಿದೆ. ಅವರಿಗೆ ಅಭಿನದನೆಗಳು.

ಪದಬಂಧ
ಡಾ||ಚಂದ್ರಶೇಖರ ರಾವ್ ಎ ಎಸ್
ಪದಬಂಧ

ಸುಳುಹುಗಳು :
1) ಮಾತಿಗೆ ತಪ್ಪುವುದು
2) ಗೂಬೆ, ಗೂಗೆ, ಹೇನು
3) ನೃತ್ಯದ ಒಂದು ಭಂಗಿ, ಸೋಲಿಲ್ಲದವನು.

ಭಹಳ ಚನ್ನಾಗಿದೆ. ಓದಿ ಬಹಳ ಸಂತೋಷ ವಾಯಿತು